ತಾರಾ

‘ಭವತಿ ಭಿಕ್ಷಾಂದೇಹಿ’

ಭಿಕ್ಷಾಪಾತ್ರೆ ಹಿಡಿದು
ಮನೆ ಮನೆಯಿಂದಲೂ
ಬೇಡಿ ತಂದಿದ್ದು
ಕರಗದ ದಾರುಣ ಸಂಕಟವನ್ನೇ

ಅಗಿದು ಜಗಿದರೂ ತೀರದ ನೋವು
ಸುಮ್ಮನೇ ಪಚನವಾದೀತೇ?
ಬೊಗಸೆಯಲಿ ಆಪೋಷಿಸಿ
ನೀಗಿಕೊಂಡ ಬೋಧಿಸತ್ವನೇನೋ
ಬುದ್ಧನಾಗಿಹೋದ!

ಆದರೆ ಒಳಗಿಳಿದದ್ದು ಸುಮ್ಮನುಳಿದೀತೆ?
ಹೃದಯ ತುಂಬಿ ಕುಡಿದದ್ದು
ಕರುಳೇ ಬಿರಿದು
ನೊಂದ ನೋವೇ ಕಾರುಣ್ಯರಸವಾಗಿ
ಕಣ್ಣು ತುಂಬಿ
ತಣ್ಣಗೆ ಹರಿದು ನೀರಾಗಿ
ಕಣ್ಣೀರ ಸರೋವರವೇ ಮಡುಗಟ್ಟಿತು.

ಸುಡು ಕಾವಿಗೂ ಆವಿಯಾಗದೇ
ಉಳಿದ ದ್ರವರೂಪಿ ನೋವೆಲ್ಲ
ಸೋಸಿ ಸೋಸಿ ತಿಳಿಯಾದ
ಸ್ವಚ್ಛ ನೀರಿನೊಳಗೆ
ಅಚ್ಛ ಬಿಳಿ ಕಮಲ ಬಿರಿದು
ಅದರೊಳಗೆ
ಅರಳಿಕೊಂಡವಳು
ಆ ಬುದ್ದನದೇ ಹೆಣ್ಣುರೂಪ
ತಾರಾ
*****
[ಟಿಬೇಟಿಯನ್ ಬೌದ್ಧಧರ್ಮದ ಪರಿಕಲ್ಪನೆಯಲ್ಲಿ- ನೋವು ನುಂಗಿದ ಬುದ್ಧನ ಸಂಕಟ ಕಣ್ಣೀರಾಗಿ ಹರಿದು ಉಂಟಾದ ಸರೋವರದಲ್ಲಿ ಅರಳಿದ ಕಮಲದಿಂದ ಬುದ್ಧನ ಸ್ತ್ರೀರೂಪವೊಂದು ತಾರಾ ಬುದ್ಧಳಾಗಿ ಹೊರಹೊಮ್ಮಿದ ಕಥೆಯಿದೆ.]

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಥನ ಹಾಗೂ ಪುರಾಣ: ಒಂದು ವಸ್ತುವಿನ ಎರಡು ಮುಖಗಳು
Next post ಅಷ್ಟಮನಿಗೆ ಜನ್ಮಾಷ್ಟಮಿ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys